ವೇಣುಗೋಪಾಲ್ ಒಂದು ಸಂದೇಶಕ್ಕೆ ಕೇರಳದವರಿಗೆ 180 ಮನೆ ಕಟ್ಟಿ ಕೊಡ್ತೀರಾ, ನಮ್ಮವರಿಗೆ ಯಾರು ಮನೆ ಕೊಡ್ತಾರೆ? ರವಿಕುಮಾರ್ ಪ್ರಶ್ನೆ
ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್ಗಳ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಕಿಡಿಕಾರಿದ್ದಾರೆ. ಕೆಸಿ ವೇಣುಗೋಪಾಲ್ ಅವರ ಒಂದು ಎಕ್ಸ್ ಪೋಸ್ಟ್ಗೆ ಕೇರಳದವರಿಗೆ 180 ಮನೆ ಕಟ್ಟಿಕೊಡಲು ಸರ್ಕಾರ ಮುಂದಾಗಿದೆ. ಆದರೆ, ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಮನೆ ಇಲ್ಲದ ಕನ್ನಡಿಗರಿಗೆ ನೆರವಾಗದಿರುವುದು ಏಕೆ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.