: ಖ್ಯಾತ ನಟ, ನಿರ್ಮಾಪಕ ನಿಧನ – ಚಿತ್ರರಂಗಕ್ಕೆ ದೊಡ್ಡ ಆಘಾತ
ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ಜಿ.ವಿ. ನಾರಾಯಣ ರಾವ್ (73) ಅವರು ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ.
ʼಸಿಫೈ ಜೋಶ್ʼ ವರದಿಯ ಪ್ರಕಾರ, ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ (ಆ.26) ಸಂಜೆ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಚಲನಚಿತ್ರ ಕಲಾವಿದರ ಸಂಘ (MAA) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಜಿ.ವಿ. ನಾರಾಯಣ ರಾವ್ (GV Narayana Rao) ಅವರು ಕೃಷ್ಣ ಜಿಲ್ಲೆಯ ಕುರುಮದ್ದಲಿ ಗ್ರಾಮದಲ್ಲಿ ಜನಿಸಿದರು. ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯ ತರಬೇತಿ ಪಡೆದ ನಂತರ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇದನ್ನೂ ಓದಿ: ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ- ಅಭಿಮಾನಿಗಳಿಗೆ ಕಿಚ್ಚನಿಂದ ಪತ್ರ
1976 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ 'ಅಂತುಲೇನಿ ಕಥಾ' ಚಿತ್ರದ ಮೂಲಕ ನಟನೆಯನ್ನು ಪ್ರಾರಂಭಿಸಿದ ಅವರಿಗೆ ಮೊದಲ ಚಿತ್ರದಲ್ಲೇ ಅತ್ಯುತ್ತಮ ಪೋಷಕ ನಟ 'ನಂದಿ ಪ್ರಶಸ್ತಿ' ಲಭಿಸಿತು. ನಂತರ 'ಮುತ್ಯಾಲ ಪಲ್ಲಕಿ', 'ಒಕ ಊರಿ ಕಥಾ', 'ಚಿಲಕಮ್ಮ ಚೆಪ್ಪಿಂದಿ' ಮತ್ತು 'ಊರುಕಿಚ್ಚಿನ ಮಾಟ' ಮುಂತಾದ ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಮುಂದೆ ಪೋಷಕ ಪಾತ್ರಗಳತ್ತ ಗಮನಹರಿಸಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ನಾರಾಯಣ ರಾವ್ ಅವರಿಗೆ ಸೂಪರ್ಸ್ಟಾರ್ ರಜಿನಿಕಾಂತ್