Nepal floods: 80 ಯಾತ್ರಿಕರು ನಾಪತ್ತೆ, ಭಾವುಕರಾದ ಸದ್ಗುರು; ಈಶಾ ಶಿಬಿರದಲ್ಲಿ ನೀರವ ಮೌನ
ಕಠ್ಮಂಡು: ನೇಪಾಲ-ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈಶಾ ಫೌಂಡೇಶನ್ನ 80 ಸದಸ್ಯರು ಕಣ್ಮರೆಯಾಗಿರುವ ದುಃಖದ ಸುದ್ದಿಯನ್ನು ಸಂಸ್ಥೆಯ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಭಾವುಕರಾಗಿ ಹಂಚಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಟಿಬೆಟ್ನ ಸಾಗಾದಲ್ಲಿರುವ ಈಶಾ ಶಿಬಿರದಲ್ಲಿ ನೀರವ ಮೌನ ಆವರಿಸಿದೆ.
ಪ್ರವಾಹ ಪೀಡಿತ ಗೈರಾಂಗ್ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಹಾಗೂ ಯಾತ್ರಿಕರ ಪತ್ತೆಗೆ ಅವಕಾಶ ನೀಡುವಂತೆ ಭಾರತ ಮತ್ತು ಚೀನಾ ರಾಯಭಾರ ಕಚೇರಿಗಳಿಗೆ ಭಾವುಕರಾಗಿ ಮನವಿ ಮಾಡಿದ್ದಾರೆ.
ಕಣ್ಣೀರಿಟ್ಟ ಸದ್ಗುರು:
ಘಟನೆಯ ಕುರಿತು ವಿವರಿಸುತ್ತಾ ತೀವ್ರ ಆಘಾತ ವ್ಯಕ್ತಪಡಿಸಿದ ಅವರು. "ನಾಶದ ಪ್ರಮಾಣವನ್ನು ನೋಡಿದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂಬುದನ್ನು ತೋರಿಸುತ್ತದೆ. ಇದು ಅತ್ಯಂತ ಭಯಾನಕ ಮತ್ತು ಅಸಾಧಾರಣ ಘಟನೆ" ಎಂದು ಅವರು ಹೇಳಿದ್ದಾರೆ.