Chitti Babu: ದಕ್ಷಿಣ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಇನ್ನಿಲ್ಲ
ತೆಲುಗು ಚಿತ್ರರಂಗದಲ್ಲಿ (Tollywood) ದುಃಖದ ಘಟನೆಯೊಂದು ನಡೆದಿದೆ. ಹಿರಿಯ ನಿರ್ಮಾಪಕ ಮತ್ತು ಪ್ರಸಿದ್ಧ ಚಿತ್ರ ವಿಮರ್ಶಕ ತ್ರಿಪುರನೇನಿ ಚಿಟ್ಟಿಬಾಬು (71) ಮಂಗಳವಾರ ಮಧ್ಯರಾತ್ರಿ ನಿಧನರಾದರು. ಮಧ್ಯರಾತ್ರಿ ಅವಧಿಯಲ್ಲಿ ಚಿಟ್ಟಿಬಾಬು ಅವರಿಗೆ ಹಠಾತ್ ಎದೆನೋವು ಆಗಿದ್ದು, ಕುಟುಂಬದವರು ತಕ್ಷಣವೇ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರನ್ನು ಉಳಿಸೋಕೆ ಸಾಧ್ಯವಾಗಿಲ್ಲ. ಪ್ರಸಿದ್ಧ ಚಿತ್ರ ಲೇಖಕ ಮತ್ತು 'ಅಲ್ಲೂರಿ ಸೀತಾರಾಮರಾಜು' ಹೀಗೆ ಅನೇಕ ಚಿತ್ರಗಳಿಗೆ ಕಥೆ ಬರೆದ ತ್ರಿಪುರನೇನಿ ಮಹಾರಥಿಯವರ ಪುತ್ರನೇ ಈ ಚಿಟ್ಟಿಬಾಬು. 1955 ಜುಲೈ 28ರಂದು ಕೃಷ್ಣಾ ಜಿಲ್ಲೆಯ ಗುಡ್ಲವಲ್ಲೇರು ಎಂಬ ಊರಲ್ಲಿ ಜನಿಸಿದ ಅವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ಹೆಚ್ಚಿನ ವಿದ್ಯೆಗಾಗಿ ಚೆನ್ನೈಗೆ ಹೋದರು.
ತಂದೆ ಚಿತ್ರರಂಗದಲ್ಲಿ ಇದ್ದ ಕಾರಣದಿಂದಲೇ ಅವರಿಗೆ ಸಹಜವಾಗಿ ಸಿನಿಮಾಗಳಿಗೆ ಆಸಕ್ತಿ ಬೆಳೆದಿತು. ಸಹಾಯಕ ನಿರ್ದೇಶಕರಿಂದ ನಿರ್ಮಾಪಕರವರೆಗೆ ಅವರ ಪ್ರಯಾಣ ಸುಂದರವಾಗಿ ಸಾಗಿ ಬಂದಿದೆ. ಮೊದಲಿಗೆ ಸಹಾಯಕ ನಿರ್ದೇಶಕರಾಗಿ ತರಬೇತಿ ಪಡೆದ ಅವರು 'ಸಂತಾನಂ' ಸಿನಿಮಾದಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ತಮ್ಮ ವೃತ್ತಿಯಲ್ಲಿ ಒಟ್ಟು 12 ಚಿತ್ರಗಳಿಗೆ ನಿರ್ದೇಶನ ಮಾಡಿ ಪ್ರತಿಭೆ ತೋರಿಸಿದರು. ತೆರೆಗೆ ಹಿಂದೆ ಮಾತ್ರವಲ್ಲದೆ ನಟನಾಗಿ ಕೂಡಾ ಜನರನ್ನು ಮೆಚ್ಚಿಸಿದರು. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು. ನಿರ್ದೇಶಕರಾಗಿ ಪಡೆದ ಅನುಭವದಿಂದ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟರು. ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದರು.