Select Location
All Locations
State
Region
City / District
ಶಬರಿಮಲೆಯಲ್ಲೂ ತುಪ್ಪ ಹಗರಣ! ಟೆಂಡರ್‌ ನಿಯಮ ಉಲ್ಲಂಘಿಸಿ ಹೆಚ್ಚಿನ ದರಕ್ಕೆ ತುಪ್ಪ ಖರೀದಿ ಆರೋಪ

ಶಬರಿಮಲೆಯಲ್ಲೂ ತುಪ್ಪ ಹಗರಣ! ಟೆಂಡರ್‌ ನಿಯಮ ಉಲ್ಲಂಘಿಸಿ ಹೆಚ್ಚಿನ ದರಕ್ಕೆ ತುಪ್ಪ ಖರೀದಿ ಆರೋಪ

ತಿರುವನಂತಪುರ: ತಿರುಮಲ ತಿರುಪತಿಯ ವೆಂಕಟೇಶ್ವರ ದೇವಾಲಯದ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ ಎಂಬ ಪ್ರಕರಣದ ರೀತಿಯಲ್ಲೇ ಈಗ ಮತ್ತೊಂದು ಪ್ರಸಿದ್ಧ ದೇವಾಲಯ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲೂ ತುಪ್ಪದ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 2025-26ರ ಮಂಡಲ ಮಕರವಿಳಕ್ಕು ಋತುವಿನಲ್ಲಿ ದೇಗುಲಕ್ಕೆ ಕೇರಳದ ಸರಕಾರಿ ಹಾಲು ಸಹಕಾರ ಸಂಸ್ಥೆಯಾದ ಮಿಲ್ಮಾದಿಂದ ತುಪ್ಪ ಸರಬರಾಜು ಮಾಡಲಾಗಿದ್ದು, ಈ ವಿತರಣೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ವಿಚಕ್ಷಣ ದಳದಿಂದ ತನಿಖೆ ನಡೆಸುವಂತೆ ಆದೇಶಿಸಿದೆ.

ತಮಿಳುನಾಡಿನ ಸಂಸ್ಥೆಯೊಂದು ಕೆ.ಜಿ.ಗೆ 375 ರೂ.ನಂತೆ ತುಪ್ಪ ನೀಡಲು ಪ್ರಸ್ತಾವ ಸಲ್ಲಿಸಿದ್ದರೂ 515 ರೂ. ನೀಡಿ ಮಿಲ್ಮಾದಿಂದಲೇ ತುಪ್ಪ ಖರೀ ದಿಸಲಾಗಿದೆ ಇದರಿಂದ ದೇವಸ್ವಂ ಮಂಡಳಿಗೆ 3 ಕೋ. ರೂ. ನಷ್ಟವಾಗಿದೆ ಎಂದೂ ಆರೋಪಿಸಲಾಗಿತ್ತು. ಈ ವರದಿ ಬೆನ್ನಲ್ಲೇ ಸ್ವಯಂ ಪ್ರಕರಣ ವನ್ನು ದಾಖಲಿಸಿಕೊಂಡ ಕೇರಳ ಹೈಕೋರ್ಟ್‌, ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಸೂಚಿಸಿದೆ. ಇತ್ತ ಮಿಲ್ಮಾ ಸಂಸ್ಥೆ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದು, ನಮ್ಮಿಂದ ಪೂರೈಕೆಯಾದ ತುಪ್ಪದಲ್ಲಿ ಯಾವುದೇ ದೋಷವಿರಲಿಲ್ಲ ಎಂದು ತಿಳಿಸಿದೆ.


Udayavani 1 hour ago
Home Flash News