ಅಡುಗೆ ಅನಿಲ ಕೊರತೆ ವದಂತಿಗೆ ಕಿವಿಗೊಡಬೇಡಿ: ಪೂರೈಕೆ ಸ್ಥಿರ, ದಾಸ್ತಾನು ಲಭ್ಯ
ಕಾರ್ಕಳ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅಡುಗೆ ಅನಿಲ (ಎಲ್ಪಿಜಿ) ಕೊರತೆಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಎಸಿಎಲ್ ) ಡೀಲರ್ಸ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಪೈ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಎಲ್ಲಾ ಡೀಲರ್ಗಳ ಬಳಿ ಗ್ಯಾಸ್ ದಾಸ್ತಾನು ಇದ್ದು, ಯಾವುದೇ ಕೊರತೆಯಾಗಿಲ್ಲ.
ಈ ಕುರಿತು ಎಚ್ಪಿಸಿಎಲ್ ಸಂಸ್ಥೆಯೂ ಅಧಿಕೃತ ಮಾಹಿತಿ ನೀಡಿದ್ದು, ದೇಶದಲ್ಲಿ ಇಂಧನ ಭದ್ರತೆ ಬಲಿಷ್ಠವಾಗಿದೆ. ಇಂಧನ ಲಭ್ಯತೆಯ ಬಗ್ಗೆ ಆತಂಕ ಬೇಡ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮಾರ್ಗಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ:
ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 15 ಸಿಲಿಂಡರ್ಗಳ ಬಳಕೆಯ ಮಿತಿ ಇದೆ. ಆದರೆ ಸದ್ಯದ ಸೂಚನೆಯಂತೆ, ಹೊಸದಾಗಿ ಗ್ಯಾಸ್ ಬುಕ್ ಮಾಡಲು ಬುಕ್ಕಿಂಗ್ ದಿನಾಂಕದಿಂದ ಮುಂದಿನ ಬುಕ್ಕಿಂಗ್ ದಿನಾಂಕಕ್ಕೆ ಕನಿಷ್ಠ ಒಂದು ತಿಂಗಳು ಪೂರ್ಣಗೊಂಡಿರಬೇಕು ಎಂದು ಅವರು ತಿಳಿಸಿದ್ದಾರೆ