ಯಾವುದೇ ಸಮಸ್ಯೆಗೆ ಸೇನಾ ಸಂಘರ್ಷವೊಂದೇ ಪರಿಹಾರವಲ್ಲ: ಪ್ರಧಾನಿ ಮೋದಿ
ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮತ್ತು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂ ಬ ಆರೋಪಗಳ ಮಧ್ಯೆಯೇ ಭಾರತದ ನಿಲುವು ಏನಿದೆ ಎಂಬುದನ್ನು ಪ್ರಧಾನಿ ಮೋದಿ ಅವರು ಬಹಿರಂಗಪಡಿಸಿದ್ದಾರೆ. ಯಾವುದೇ ಸಮಸ್ಯೆಯನ್ನು ನಾವು ಸೇನಾ ಶಕ್ತಿ, ಮಿಲಿಟರಿ ಸಂಘರ್ಷಗಳಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಗಳಿಗೆ ಅದೊಂದೆ ಪರಿಹಾರವೂ ಅಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಆ ಮೂಲಕ ಭಾರತವು ಜಗತ್ತಿನ ಶಾಂತಿಯನ್ನು ಪ್ರತಿಪಾದಿಸುತ್ತದೆ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ. ಫಿನ್ಲ್ಯಾಂಡ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಪಂಚ ಸದ್ಯ ಅಸ್ಥಿರತೆ ಕಡೆಗೆ ಸಾಗುತ್ತಿದೆ. ಉಕ್ರೇನ್ನಿಂದ ಪಶ್ಚಿಮ ಏಷ್ಯಾ ಅಷ್ಟೇ ಅಲ್ಲದೇ ಜಗತ್ತಿನ ಹಲವೆಡೆ ಅಸ್ಥಿರತೆ ಅಶಾಂತಿ ಮನೆ ಮಾಡುತ್ತಿದೆ ಎಂದು ಹೇಳಿದರು.