Big Blow to AAP: ರಾಘವ್ ಚಡ್ಡಾ ಸಹಿತ 7 ಆಪ್ ಸಂಸದರ ಬಿಜೆಪಿ ಸೇರ್ಪಡೆಗೆ ರಾಜ್ಯಸಭಾ ಅಧ್ಯಕ್ಷರ ಅನುಮೋದನೆ
ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಸಭಾ ಅಧ್ಯಕ್ಷರು (Rajya Sabha) ಏಳು ಎಎಪಿ (Aam aadmi Party) ಸಂಸದರನ್ನು ಭಾರತೀಯ ಜನತಾ ಪಕ್ಷ (BJP) ದೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದಾರೆ. ರಾಜ್ಯಸಭಾ ಸಚಿವಾಲಯವು ಈ ಕ್ರಮವನ್ನು ದೃಢೀಕರಿಸುವ ಅಧಿಕೃತ ಸೂಚನೆಯನ್ನು (Big Blow to AAP) ಸಹ ಹೊರಡಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಏಳು ರಾಜ್ಯಸಭಾ ಸಂಸದರಾದ ರಾಘವ್ ಛಡ್ಡಾ, ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ವಿಕ್ರಮ್ಜಿತ್ ಸಿಂಗ್ ಸಹ್ನಿ, ಸ್ವಾತಿ ಮಲಿವಾಲ್ ಮತ್ತು ರಾಜಿಂದರ್ ಗುಪ್ತಾ ಅವರು ಏಪ್ರಿಲ್ 24 ರಂದು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷದ ದೆಹಲಿ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು. ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಮತ್ತು ಹಿರಿಯ ನಾಯಕ ತರುಣ್ ಚುಗ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ನಡೆಯಿತು.
ಸಭೆಗೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಛಡ್ಡಾ, ಪಾಠಕ್ ಮತ್ತು ಮಿತ್ತಲ್ ಅವರೊಂದಿಗೆ, ಎಎಪಿಯ ರಾಜ್ಯಸಭಾ ಸಂಸದರಲ್ಲಿ ಮೂರನೇ ಎರಡರಷ್ಟು ಜನರು ಪಕ್ಷದಿಂದ ದೂರವಾಗಿದ್ದು, ಪ್ರತ್ಯೇಕ ಬಣವಾಗಿ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಹೇಳಿದ್ದರು. ರಾಜ್ಯಸಭಾ ಅಧ್ಯಕ್ಷರು ಏಳು ಎಎಪಿ ಸಂಸದರನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿರುವುದು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರೀ ಹಿನ್ನಡೆಯಾಗಿದೆ.
ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ 7 ಸಂಸದರು ಬಿಜೆಪಿಗೆ ಸೇರಿದ ನಂತರ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ 113 ಕ್ಕೆ ಏರಿದೆ, ಅದರಲ್ಲಿ 5 ಮಂದಿ ರಾಷ್ಟ್ರಪತಿಗಳಿಂದ ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಸದ್ಯ ಎಎಪಿ ಬಳಿ ಕೇವಲ 3 ಸಂಸದರು ಮಾತ್ರ ಉಳಿದಿದ್ದಾರೆ. ಕಳೆದ ಶುಕ್ರವಾರ, ರಾಘವ್ ಛಡ್ಡಾ ಮತ್ತು ಸಂದೀಪ್ ಪಾಠಕ್ ಅವರು ಬಿಜೆಪಿಗೆ ಸೇರುವುದಾಗಿ ಘೋಷಿಸಿದರು ಎಂಬುದು ಗಮನಿಸಬೇಕಾದ ಸಂಗತಿ. ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ಸಂಸದರಿಗೆ ಸಿಹಿ ತಿನ್ನಿಸುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಏಳು ಎಎಪಿ ಸಂಸದರು ಬಿಜೆಪಿಯೊಂದಿಗೆ ವಿಲೀನಗೊಂಡ ನಂತರ ಆಮ್ ಆದ್ಮಿ ಪಕ್ಷವು ಈಗ ಸಂಜಯ್ ಸಿಂಗ್, ನಾರಾಯಣ್ ದಾಸ್ ಗುಪ್ತಾ ಮತ್ತು ಸಂತ ಬಲ್ಬೀರ್ ಸಿಂಗ್ ಎಂಬ ಕೇವಲ ಮೂವರು ಸಂಸದರನ್ನು ಹೊಂದಿದೆ.