Select Location
All Locations
State
Region
City / District
ವಿಜಯ್‌ ಸಿಎಂ ಆದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಕೈ ಮುಗಿದ ರಜನಿ: ವಿಡಿಯೋ ವೈರಲ್‌

ವಿಜಯ್‌ ಸಿಎಂ ಆದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಕೈ ಮುಗಿದ ರಜನಿ: ವಿಡಿಯೋ ವೈರಲ್‌

ಚೆನ್ನೈ (ಮೇ.13): ಚೆನ್ನೈನಲ್ಲಿ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಒಂದು ಕ್ಷಣದ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಅವರನ್ನು ಪತ್ರಕರ್ತರು ಸುತ್ತುವರಿದಿದ್ದರು. 'ವಿಜಯ್ ಸಿಎಂ ಆಗಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?' ಎಂದು ಪ್ರಶ್ನೆ ಕೇಳಲಾಗಿದೆ. ಪತ್ರಕರ್ತರ ಪ್ರಶ್ನೆಗೆ ಕೈಮುಗಿದ ರಜನಿಕಾಂತ್! ಆದರೆ ರಜನಿಕಾಂತ್ ಯಾವುದೇ ಉತ್ತರ ನೀಡದೆ ನಗುತ್ತಾ ಕೈ ಮುಗಿದು ಮುಂದೆ ಸಾಗಿದ್ದಾರೆ. ಅವರ ಈ ಮೌನ ಪ್ರತಿಕ್ರಿಯೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಗಮನಾರ್ಹವಾಗಿ, ಫಲಿತಾಂಶ ಪ್ರಕಟವಾದ ಮೇ 4 ರಂದು ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ರಜನಿಕಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯ್‌ಗೆ ಶುಭಾಶಯ ಕೋರಿದ್ದರು. ಈಗಿನ ಮೌನ ನಡೆ ಮಾತ್ರ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.


Asianet News 1 hour ago
Home Flash News