ಟೀಮ್ ಇಂಡಿಯಾ ಟಿ20 ನಾಯಕತ್ವ ಬದಲಾವಣೆ ಖಚಿತ: ಸೂರ್ಯಕುಮಾರ್ ಬದಲಿಗೆ ಯಾರು?
ನವದೆಹಲಿ: ಭಾರತ ಕ್ರಿಕೆಟ್ ತಂಡವು ಟಿ20 ನಾಯಕತ್ವವನ್ನು ಬದಲಾವಣೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದ್ದು, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂದಿನ ಸರಣಿ ವೇಳೆ ಸೂರ್ಯ ಕುಮಾರ್ ಯಾದವ್ ಅವರ ಬದಲಿಗೆ ತಂಡದ ಜವಾಬ್ದಾರಿ ಬೇರೊಬ್ಬ ಆಟಗಾರನ ಹೆಗಲಿಗೇರಿಸುವ ಸಾಧ್ಯತೆಗಳಿವೆ. ಶ್ರೇಯಸ್ ಅಯ್ಯರ್ ಅವರು ಟಿ20 ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಯ್ಯರ್ ಅವರು ನಾಯಕನಾಗಿ ನೇಮಕವಾದರೆ ಮಾರ್ಚ್ನಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಪ್ರಶಸ್ತಿಗೆ ಗೆಲ್ಲಲು ಕಾರಣವಾದ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಹೊಣೆಗಾರಿಗೆ ಅಂತ್ಯವಾಗುವುದಕ್ಕೆ ಕಾರಣವಾಗುತ್ತದೆ. ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸೂರ್ಯಕುಮಾರ್ ಅವರ ಭವಿಷ್ಯದ ಬಗ್ಗೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರೊಂದಿಗೆ ಸಮಾಲೋಚಿಸಲಾಗುವುದು ಎಂದು ಹೇಳಲಾಗಿದೆ. ಹೆಚ್ಚೆಂದರೆ ಅನಿವಾರ್ಯವನ್ನು ವಿಳಂಬಗೊಳಿಸಲು ಸಾಧ್ಯವಾಗಬಹುದು, ಆದರೆ ಅದು ಕೂಡ ಈ ಸಂದರ್ಭ ಅಸಾಧ್ಯವೆಂದು ಹೇಳಲಾಗಿದೆ.
ಆಯ್ಕೆದಾರರು ದೀರ್ಘಾವಧಿಯ ಪರಿಹಾರವನ್ನು ಹುಡುಕುತ್ತಿದ್ದಾರೆ. ಮುಂದಿನ ಎರಡು ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಮುಂದಿನ ನಾಯಕ ಭಾರತ ತಂಡವನ್ನು ಮುನ್ನಡೆಸಬೇಕು ಎನ್ನುವುದು ಆಯ್ಕೆದಾರದ ದೂರಾಲೋಚನೆಯಾಗಿದೆ. ಗಮನಾರ್ಹವಾಗಿ, ಸೂರ್ಯಕುಮಾರ್ ಯಾದವ್ ಈ ವರ್ಷದ ಆರಂಭದಲ್ಲಿ ಭಾರತವನ್ನು ಟಿ20 ವಿಶ್ವಕಪ್ ವಿಜಯಕ್ಕೆ ಮುನ್ನಡೆಸಿದ್ದರು, ಆದರೆ ಅವರು ಬ್ಯಾಟಿಂಗ್ನಲ್ಲಿ ಸ್ಥಿರತೆಗಾಗಿ ಹೆಣಗಾಟ ನಡೆಸುತ್ತಿದ್ದಾರೆ. ಐಪಿಎಲ್ ನಲ್ಲಿಯೂ ಮುಂಬೈ ಇಂಡಿಯನ್ಸ್ ಪರ 13 ಪಂದ್ಯಗಳಲ್ಲಿ ಕೇವಲ 270 ರನ್ ಗಳಿಸಿದ್ದರು, ಮುಂಬೈ ತಂಡವು ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಇನ್ನಿಬ್ಬರು ರೇಸ್ ನಲ್ಲಿ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಅವರ ಅನುಭವ ಮತ್ತು ರನ್ಗಳು ಅವರಿಗೆ ನಾಯಕತ್ವಕ್ಕೆ ಪರಿಗಣಿಸಲು ಹತ್ತಿರವಾಗಿಸಿದರೆ,ತಿಲಕ್ ವರ್ಮ ಮತ್ತು ಇಶಾನ್ ಕಿಶನ್ ಕೂಡ ರೇಸ್ ನಲ್ಲಿದ್ದಾರೆ. ಒಂದು ವೇಳೆ ಅಯ್ಯರ್ ನಾಯಕತ್ವ ವಹಿಸಿಕೊಂಡರೆ, ತಿಲಕ್ ಮತ್ತು ಇಶಾನ್ ಅವರ ಪೈಕಿ ಒಬ್ಬರು ಉಪನಾಯಕರಾಗಲಿದ್ದಾರೆ. ಬಿಸಿಸಿಐ ಏಷ್ಯನ್ ಕ್ರೀಡಾಕೂಟಕ್ಕೆ ತಂಡ ಘೋಷಿಸಬೇಕಾಗಿದ್ದು , ಭಾರತ 2022 ರಲ್ಲಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ತಮ್ಮ ಮೊದಲ ಆಯ್ಕೆಯ ತಂಡವನ್ನು ಕಳುಹಿಸಬೇಕಾಗಿದೆ.