Select Location
All Locations
State
Region
City / District
Zameer Ahmed: ಜಮೀರ್‌ಗಾಗಿ ರಕ್ತದಲ್ಲಿ ಪತ್ರ! ಮಾಜಿ ಸಚಿವರ ಪರ ರಾಹುಲ್ ಗಾಂಧಿಗೆ ರೈತ ಮುಖಂಡನ ಮನವಿ

Zameer Ahmed: ಜಮೀರ್‌ಗಾಗಿ ರಕ್ತದಲ್ಲಿ ಪತ್ರ! ಮಾಜಿ ಸಚಿವರ ಪರ ರಾಹುಲ್ ಗಾಂಧಿಗೆ ರೈತ ಮುಖಂಡನ ಮನವಿ

ಹೂವಿನಹಡಗಲಿ, ವಿಜಯನಗರ: ಮಾಜಿ ಸಚಿವ (former minister) ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರಿಗೆ ಈ ಬಾರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ (DK Shivakumar’s Cabinet) ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಇದೀಗ ಜಮೀರ್ ಅಹ್ಮದ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಪತ್ರ ಬರೆಯಲಾಗಿದೆ. ಅದು ಬರೀ ಪತ್ರ ಆಗಿದ್ದರೆ ಅದರಲ್ಲೇನೂ ವಿಶೇಷತೆ ಇರಲಿಲ್ಲ. ಆದರೆ ಇದು ರಕ್ತದಲ್ಲಿ (Blood) ಬರೆದ ಪತ್ರ!

ಬಿಝಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ರೈತ ಮುಖಂಡನೊಬ್ಬ ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದಿದ್ದಾವೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಎಂಎಂ ಸಿದ್ದೇಶ್ ಎಂಬುವರು ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಎಂಎಂ ಸಿದ್ದೇಶ್ ತಮ್ಮ ರಕ್ತ ತೆಗೆದು, ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿದ್ದಾರೆ.


News18 Kannada 1 hour ago
Home Flash News