ಜಾನುವಾರು ಗಣತಿ ಮುಗಿದು 7 ತಿಂಗಳು ಕಳೆದರೂ ಗಣತಿದಾರರಿಗೆ ಇನ್ನೂ ತಲುಪಿಲ್ಲ ಗೌರವಧನ
ಮಂಗಳೂರು: ರಾಜ್ಯದಲ್ಲಿ 21ನೇ ಜಾನುವಾರು ಗಣತಿ ಕಾರ್ಯ ಮುಗಿದು ಏಳು ತಿಂಗಳಾದರೂ ಗಣತಿದಾರರಿಗೆ ಗೌರವಧನ ಪಾವತಿ ಆಗಿಲ್ಲ. ಸರ್ಕಾರಿ ನೌಕರರಲ್ಲದ ಪಶುಸಖಿಯರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಸ್ವಂತ ಹಣ ಖರ್ಚು ಮಾಡಿ ಸಮೀಕ್ಷೆ ನಡೆಸಿರುವ ಪಶು ಸಖಿಯರು, ಗೌರವಧನಕ್ಕಾಗಿ ಕಾಯುತ್ತಿದ್ದಾರೆ.