Select Location
All Locations
State
Region
City / District
ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಇಲ್ಲಿ ಪೇಡೆ ಹಂಚುತ್ತಾರೆ, ನಮ್ಮ ರಾಜ್ಯದಲ್ಲಿ ಏನು ಮಾಡಿದ್ದೀರಿ? ಯತ್ನಾಳ್!

ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಇಲ್ಲಿ ಪೇಡೆ ಹಂಚುತ್ತಾರೆ, ನಮ್ಮ ರಾಜ್ಯದಲ್ಲಿ ಏನು ಮಾಡಿದ್ದೀರಿ? ಯತ್ನಾಳ್!

ಕೊಪ್ಪಳ (ಮೇ 08): 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದರು. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ' ಎಂದು ಗುಡುಗಿದ್ದಾರೆ.

ಇಲ್ಲಿ ಎಲ್ಲವೂ ಗೊಡ್ಡು, ಎಲ್ಲಿಂದ ಮಕ್ಕಳಾಗುತ್ತವೆ? ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 25 ಸಂಸದರಿದ್ದ ಸ್ಥಾನ ಈಗ 17ಕ್ಕೆ ಇಳಿದಿದೆ. ಇದೆಲ್ಲವೂ ಅವರ 'ಡೀಲಿಂಗ್' ರಾಜಕಾರಣದ ಫಲ ಎಂದು ಆರೋಪಿಸಿದರು.

ಯಡಿಯೂರಪ್ಪ ಅಭಿಮಾನೋತ್ಸವದ ಹಿಂದಿದೆ 'ರಿನಿವಲ್' ತಂತ್ರ! ಶೀಘ್ರದಲ್ಲೇ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಬಗ್ಗೆ ಕಿಡಿಕಾರಿದ ಅವರು, 'ಯಾವ ಪುರುಷಾರ್ಥಕ್ಕೆ ಈ ಉತ್ಸವ ಮಾಡುತ್ತಿದ್ದಾರೆ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಿಗಾ ಈ ಸಂಭ್ರಮ? ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್‌ಗೆ ಮುಕ್ತಾಯವಾಗಲಿದೆ. ಆ ಸ್ಥಾನವನ್ನು ಉಳಿಸಿಕೊಳ್ಳಲು (ರಿನಿವಲ್) ಹೈಕಮಾಂಡ್ ಮುಂದೆ ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಬಿಂಬಿಸಿಕೊಳ್ಳಲು ಈ ನಾಟಕವಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು. ಸಾವಿರಾರು ಕೋಟಿ ಗಳಿಸಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಯಡಿಯೂರಪ್ಪ ಕುಟುಂಬದ ಆಸ್ತಿಪಾಸ್ತಿ ಬಗ್ಗೆ ವಾಗ್ದಾಳಿ ನಡೆಸಿದ ಅವರು, 'ಒಂದು ಕಾಲದಲ್ಲಿ ನಿಮ್ಮ ಮನೆಯಲ್ಲಿ ಒಂದು ಕಾರ್ ಇರಲಿಲ್ಲ. ಈಗ ಪ್ರದರ್ಶನಕ್ಕಿಟ್ಟಿರುವ ಹಳೆಯ ಅಂಬಾಸಿಡರ್ ಕಾರ್ ಕೂಡ ಬಿಜೆಪಿಯದ್ದು.


Asianet News 53 minutes ago
Home Flash News